Thursday, April 25, 2019

ಒಂದು ಅತ್ಯಮೂಲ್ಯವಾದ ಪಾಠ

ಒಂದ್ ಪಾತ್ರೆಲಿ ನೀರು ಹಾಕಿ ಅದರಲ್ಲಿ ಒಂದು ಕಪ್ಪೆ ಬಿಟ್ಟು ಒಲೆ ಹಚ್ಚಿ ಬಿಸಿ ಮಾಡಿದರೆ ಏನಾಗುತ್ತೆ ಗೊತ್ತಾ? ಕಪ್ಪೆ ಬಿಸಿ ಆಗ್ತಿರೋ ನೀರಿಗೆ ಒಗ್ಗಿಕೊಳ್ತಾ ಬರುತ್ತೆ. ಆದರೆ ನೀರು ಇನ್ನೇನು ಕುದಿಯುವಷ್ಟು ಬಿಸಿ ಆದಾಗ ಅದಕ್ಕೆ ಇನ್ನು ತಡಿಯಕ್ಕಾಗಲ್ಲ. ಆಗ ಹೊರಗೆ ಹಾರಿ ಹೋಗಕ್ಕೆ ಪ್ರಯತ್ನ ಮಾಡುತ್ತೆ...ಆದ್ರೆ ಆಗ ಅದಕ್ಕೆ ಹಾರಕ್ಕಾಗಲ್ಲ... ಯಾಕಂದ್ರೆ ಅದರ ಶಕ್ತಿಯೆಲ್ಲ ಹೊರಟು ಹೋಗಿರುತ್ತೆ. ಆದ್ದರಿಂದ ಕಪ್ಪೆ ಸತ್ತುಹೋಗುತ್ತೆ.
ಈಗ ಪ್ರಶ್ನೆ - ಕಪ್ಪೆ ಯಾಕೆ ಸಾಯುತ್ತೆ? ಯೋಚನೆ ಮಾಡಿ!
ನಿಮ್ಮಲ್ಲೆ ಎಷ್ಟೋ ಜನ ಕುದಿಯೋ ನೀರೇ ಕಾರಣ ಅಂತ ಹೇಳ್ತೀರಿ ಅಂತ ಗೊತ್ತು, ಆದ್ರೆ ನಿಜವಾದ ಕಾರಣ ಅದಲ್ಲ. ಕಪ್ಪೆಗೆ ಯಾವಾಗ ಹೊರಗೆ ಹಾರಿ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡದೆ ಇರೋದೇ ಅದರ ಸಾವಿಗೆ ಕಾರಣ.
ನಾವೂ ಅಷ್ಟೆ... ಸುಮಾರ್ ಸಲಿ ಜನರು ಏನ್ ಮಾಡ್ತಾ ಇದ್ದರೂ ನಾವು ಅಡ್ಜಸ್ಟ್ ಮಾಡ್ಕೊಂಡ್ ಹೋಗ್ತಾ ಇರ್ತೀವಿ. ಆದರೆ ಯಾವಾಗ ಈ ಅಡ್ಜಸ್ಟ್ ಅನ್ನೋದನ್ನ ನಿಲ್ಲಿಸಿ ‘ಹೊರಗೆ’ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡಲ್ಲ.
ಜನರು ನಮ್ನ ದೈಹಿಕವಾಗಿ... ಮಾನಸಿಕವಾಗಿ... ಆರ್ಥಿಕವಾಗಿ... ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳಕ್ಕೆ ಬಿಟ್ಟರೆ... ಅವರು ಉಪಯೋಗಿಸಿಕೊಳ್ಳೋದನ್ನ ನಿಲ್ಲಿಸಲ್ಲ... ಮುಂದುವರೆಸ್ತಾನೇ ಇರ್ತಾರೆ...
ಆದರೆ ನಾವು ಈ ಕಪ್ಪೆಗಳ ತರಹ ಆಗೋದು ಬೇಡ. ಯಾವಾಗ ಹಾರಬೇಕು ಅನ್ನೋದು ನಮಗೆ ಗೊತ್ತಿರಬೇಕು! ಇನ್ನೂ ಹಾರಕ್ಕೆ ಶಕ್ತಿ ಇರುವಾಗಲೇ ಹಾರಿಬಿಡಬೇಕು.
ಒಳ್ಳೇದಾಗಲಿ!

No comments: