Saturday, June 30, 2012

I hate Google

ನಂಗೆ ಗೂಗಲ್ ಸ್ವಲ್ಪನೂ
ಇಷ್ಟ ಆಗ್ಲಿಲ್ಲ ಕಣ್ರಿ

ಯಾಕಂದ್ರೆ
ಅದರ ಕೈಯಲ್ಲಿ
ನನಗೊಂದು
Girl Friend ಹುಡುಕೋಕೆ
ಆಗ್ಲಿಲ್ಲ.............

Thursday, June 21, 2012

ಹುಡುಗಿರೆಂದರೆ,,,,,,,,

 ಹುಡುಗಿರೆಂದರೆ,,,,,,,,

ಹುಡುಗಿರೆಂದರೆ 70% Beauty

ಹುಡುಗಿರೆಂದರೆ 75% Sweety

ಹುಡುಗಿರೆಂದರೆ 85% Noughty

ಹುಡುಗಿರೆಂದರೆ 90% Cuty

ಹುಡುಗಿರೆಂದರೆ 100% Lovely

ಹುಡುಗಿರೆಂದರೆ Totaly 70+75+85+90+100=420

Be careful

ನೆನಪು

ಹುಡುಗನ ನೆನಪು
ಹುಡುಗಿಯರಿಗೆ ಪಿಟ್ಸ್ ಇದ್ದ ಹಾಗೆ.

ಬರುತ್ತೆ, ಹೋಗುತ್ತೆ.

ಆದರೆ,

ಹುಡುಗಿಯ ನೆನಪು

ಹುಡುಗರಿಗೆ AIDS ಇದ್ದ ಹಾಗೆ.

ಬರುತ್ತೆ,

ಆದರೆ

ಹೋಗಲ್ಲ !!!

Friday, June 15, 2012

ಹಾಸ್ಯ-ಲಾಸ್ಯ

ನೆಟ್ ನಿಂದ ಹೆಕ್ಕಿದ್ದು

1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
2. ಹುಡುಗಃ ನಾವಿಬ್ರೂ ಓಡಿಹೋಗೋಣ್ವ..?
ಹುಡುಗಿಃ ನಂಗೆ ಒಬ್ಬಳೇ ಬರೋಕೆ ಭಯ ಆಗುತ್ತೆ.
ಹುಡುಗಃ ಹಾಗಾದ್ರೆ ಜೊತೆಗೆ ನಿನ್ನ ತಂಗೀನೂ ಕರ್ಕೋಂಡು ಬಾ.
3. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಗುವವನಿಗೆ ' ಮದುವೆ ಗಂಡು " ಎನ್ನಬಹುದು.
4. ಹೆಣ್ಣು ಗಂಡಿಗಿರುವ ವ್ಯತ್ಯಾಸ;
ಹೆಣ್ಣು ಗಂಡ ಸಿಗೋವರೆಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ.
ಗಂಡು ಹೆಂಡ್ತಿ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ.
5. ಮುದಿಸೊಳ್ಳೆಃ ಮಗೂ... ನಮ್ಮ ಕಾಲದಲ್ಲಿ ರಕ್ತ ಕುಡಿಬೇಕಾದ್ರೆ ಎಷ್ಟು ಕಷ್ಟ ಆಗ್ತಿತ್ತು ಗೊತ್ತಾ.
ಮೊಮ್ಮಗ ಸೊಳ್ಳೆಃ ಯಾಕೆ.. ತಾತ..?
ಮುದಿಸೊಳ್ಳೆಃ ಆವಾಗ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ಕೋತಾ ಇದ್ರು.
6. ಗುಂಡ ಹೋಟೆಲ್ ಮ್ಯಾನೇಜರ್ ಗೆ; ನನ್ನ ಹೆಂಡ್ತಿ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಬೇಗ ಬಾ..
ಹೋಟೇಲ್ ಮ್ಯಾನೇಜರ್ ; ಸಾರ್ ಅದಕ್ಕೆ ನಾನೇನ್ ಮಾಡ್ಲಿ..?
ಗುಂಡ. ; ಅಯ್ಯೋ ಕಿಟಕಿ Open ಆಗ್ತಿಲ್ಲ, ಸ್ವಲ್ಪ ಹೆಲ್ಪ್ ಮಾಡು ಬಾರಯ್ಯ.
7. ಅಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ತನ್ನ ಮನ ಶಾಂತಿಗಾಗಿ
ಇಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ಪಕ್ಕದ ಮನೆ ಶಾಂತಿಗಾಗಿ.
8. ಬಾಸ್ ; ಯಾಕೋ ನಾಣಿ ಆಫೀಸಿಗೆ ಲೇಟು.
ನಾಣಿ ; ಹೆಂಡ್ತಿಗೆ ಅಡುಗೆ ಮಾಡಿಟ್ಟು ಬರೋದಕ್ಕೆ ಸ್ವಲ್ಪ ಲೇಟಾಯಿತು ಸಾರ್.
ಬಾಸ್ ; ಈಡಿಯೇಟ್ ಸುಳ್ಳು ಹೇಳಬೇಡ, ನಾನು ಅಡುಗೆ ಮಾಡಿ, ಜೊತೆಗೆ ಪಾತ್ರೆ ತೊಳೆದು ಕರೆಕ್ಟ್ ಟೈಮಿಗೆ ಆಫೀಸಿಗೆ ಬರೋಲ್ವ..!!
9. ನನ್ನಲ್ಲೊಂದು ಕ್ಯಾಮೆರಾ ಇದ್ದಿದ್ರೆ ನಿನ್ನ ಪ್ರತಿಯೊಂದು ಚಲನವಲನಗಳನ್ನು ಕ್ಲಿಕ್ಕಿಸುತ್ತಿದ್ದೆ.
ಆ ಮೋಹಕ ನಗೆ.. ಮುದ್ದು ಮೊಗ ಎಲ್ಲವನ್ನೂ ಕ್ಲಿಕ್ಕಿಸಿ ನನ್ನ ಕಿಚನ್ ನಲ್ಲಿ ಅಂಟಿಸಿ.......
!
!
!
!
ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳನ್ನು ಭಯಪಡಿಸುತ್ತಿದ್ದೆ.
10. ಬಿಕ್ಷುಕಃ ಅಮ್ಮಾ.. ಒಂದು ರೂಪಾಯಿ ಬಿಕ್ಷೆ ಹಾಕಮ್ಮ.
ಆಕೆಃ ಲೋ ಹೀಗೆ ರೋಡ್ ನಲ್ಲಿ ನಿಂತು ಬಿಕ್ಷ ಕೇಳೋಕೆ ನಾಚ್ಗೆ ಆಗೋಲ್ವ..?
ಬಿಕ್ಷುಕ್ಷಃ ಹೋಗಮ್ಮ.. ನೀನು ಕೊಡೋ ಒಂದು ರೂಪಾಯಿಗೆ ನಾನು ಆಫೀಸ್ ನಲ್ಲಿ ಕೂತ್ಕೋಬೇಕಾ..?

ಕೋರ್ಟ್ ನಲ್ಲಿ ಆವಾಂತರ

ನೆಟ್ ನಿಂದ ಹೆಕ್ಕಿದ್ದು

ಕೋರ್ಟ್ ನಲ್ಲಿ ವಾದ-ವಿವಾದ ನಡೆಯುವಾಗಲೂ ಅಲ್ಲೂ ಹಾಸ್ಯ ಭರಿತ ಸನ್ನೀವೇಶ ಗಳಿರುತ್ತೆ. ಕೆಲವೊಮ್ಮೆ ಜಡ್ಜ್ ಕೂಡಾ ಮೂರ್ಖತನದ ಪ್ರಶ್ನೆ ಕೇಳಬಹುದು ಅಥವಾ ಸಾಕ್ಷಿಗಳು ಸಹ ಮುಠ್ಠಾಳತನದ ಉತ್ತರ ನೀಡ ಬಹುದು.
ಒಂದಿಷ್ಟು ಈ ತರಹದ ಸನ್ನೀವೇಶಗಳು ಇಲ್ಲಿವೆ.ಓದಿ ನಕ್ಕು ಬಿಡಿ. Laughing out loud
ಜಡ್ಜ್ : ಅವಳಿಗೆ ಮೂರು ಮಕ್ಕಳು ಅಲ್ವಾ?
ಸಾಕ್ಷಿಃ ಹೌದು
ಜಡ್ಜ್ : ಎಷ್ಟು ಮಂದಿ ಗಂಡು ಮಕ್ಕಳು?
ಸಾಕ್ಷಿ: ಒಂದೂ ಇಲ್ಲ.
ಜಡ್ಜ್ : ಸರಿ. ಯಾವುದಾದರೂ ಹೆಣ್ಣು ಮಕ್ಕಳು ಇದ್ದರಾ?
ಸಾಕ್ಷಿಃ ಅರೆರೆ!! ಯುವರ್ ಆನರ್ ನನಗೆ ಬೇರೆ ಜಡ್ಜ್ ಬೇಕು.
---------------------------------------
ಜಡ್ಜ್ : ಕೊಲೆ ಮಾಡಿದವರು ಹೇಗೆ ಕಾಣ್ತಾ ಇದ್ದರು ಅಂತಾ ವಿವರಿಸ್ತೀರಾ?
ಸಾಕ್ಷಿಃ ಒಂದೈದು ಫೀಟ್ ಇರಬಹುದು ದಪ್ಪವಾದ ಮೀಸೆ ಇತ್ತು.
ಜಡ್ಜ್ : ಗಂಡಸಾ ಅಥವಾ ಹೆಂಗಸಾ
ಸಾಕ್ಷಿಃ ನಿಮಗೇನನಿಸುತ್ತೆ? ಮೀಸೆ ಇದ್ದವರು ಯಾರಿರಬಹುದು?!!!
----------------------------------------
ಜಡ್ಜ್ : ನೀವು ಎಷ್ಟು ಗಂಟೆಗೆ ಡೆಡ್ ಬಾಡಿನಾ ಪರೀಕ್ಷೆ ಮಾಡಿದ್ರಿ ಅಂತಾ ನೆನಪು ಮಾಡ್ಕೋತೀರಾ?
ಡಾಕ್ಟರ್: ನಾನು ಸುಮಾರು 8:30 ಕ್ಕೆ ಪೋಸ್ಟ್ ಮಾರ್ಟಮ್ ಮಾಡಿದೆ.
ಜಡ್ಜ್ : ಮಿಸ್ಟರ್ ಮಂಡಕ್ಕಿ ಯವರು ಆಗ ಸತ್ತಿದ್ರಾ?
ಡಾಕ್ಟರ್ : ಇಲ್ಲ ಅವರು ಪಕ್ಕದಲ್ಲಿ ಕುರ್ಚಿ ಮೇಲೆ ಕೂತು ನಾನ್ಯಾಕೆ ಅವರನ್ನು ಪೋಸ್ಟ್ ಮಾರ್ಟಮ್ ಮಾಡ್ತಾ ಇದೀನಿ ಅಂತಾ ವಿಚಾರ ಮಾಡ್ತಾ ಇದ್ರು!!
-----------------------------------------
ಜಡ್ಜ್ : ಡಾಕ್ಟರ್ ಪೋಸ್ಟ್ ಮಾರ್ಟಮ್ ಮಾಡೋಕ್ಕಿಂತ ಮುಂಚೆ ಹೃದಯ ಬಡ್ಕೋತಾ ಇದೆಯಂತಾ ಮಾಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಹೋಗಲಿ, ಬಿಪಿ (ರಕ್ತದೊತ್ತಡ) ಚೆಕ್ ಮಾಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಉಸಿರಾಟ ಇದೆಯಾ ಅಂತಾ ನೋಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಹಾಗಿದ್ರೆ ರೋಗಿ ನೀವು ಪೋಸ್ಟ್ ಮಾರ್ಟಮ್ ಮಾಡಬೇಕಾದ್ರೆ ಜೀವಂತ ಇರಬಹುದಲ್ವಾ?
ಡಾಕ್ಟರ್ ಇಲ್ಲ
ಜಡ್ಜ್ : ಅದು ಹೇಗೆ ಹೇಳ್ತೀರಿ ಡಾಕ್ಟರ್?
ಡಾಕ್ಟರ್ ಯಾಕೆಂದ್ರೆ ಆ ರೋಗಿಯಲ್ಲಿ ಮೆದುಳು ಇರಲಿಲ್ಲ. ಅದು ಹೊರಗೆ ಬಂದಿತ್ತು
ಜಡ್ಜ್ : ಓಹೋ, ಹಾಗಾ? ಆದ್ರೂ ರೋಗಿ ಜೀವಂತ ಆಗಿರಬಹುದು. ಅಲ್ವಾ?
ಡಾಕ್ಟರ್ ಹೌದೌದು, ಅವನು ಬದುಕಿರ ಬಹುದು. ಈ ಕೋರ್ಟ್ ನ ಜಡ್ಜ್ ಆಗಿರಬಹುದು!!
---------------------------------------
ಜಡ್ಜ್ : ನಾನು ಕೇಳೋ ಪ್ರಶ್ನೆಗೆಲ್ಲಾ ಬರೀ ಉತ್ತರ ಹೇಳಬೇಕು. ಬೇರೇನು ಮಾತನಾಡಬಾರದು ಆಯ್ತಾ?
(ಕಳ್ಳ ಆಯ್ತು ಎಂಬಂತೆ ತಲೆ ಆಡಿಸಿದ)
ಜಡ್ಜ್ : ನೀನು ಎಲ್ಲಿಯವರೆಗೆ ಕಲಿತಿದ್ದೀಯಾ?
ಕಳ್ಳಃ ಉತ್ತರ
(ಜಡ್ಜ್ ಪ್ರಜ್ಞೆ ತಪ್ಪಿ ಬೀಳುವದು ಬಾಕಿ ಇತ್ತು.!!!)

Thursday, June 14, 2012

ಮನಸ್ಸಿಗೂ ಬಾಯಿಗೂ ಮಧ್ಯ ಇರೋ ಫಿಲ್ಟರೇ ಕಿತ್ತು ಹೋದಾಗ

ನೆಟ್ ನಿಂದ ಹೆಕ್ಕಿದ್ದು

ಹೀಗೊಮ್ಮೆ ಯೋಚಿಸಿ ಮನಸ್ಸಿಗೂ ಬಾಯಿಗೂ ಮಧ್ಯ ಇರೋ ಫಿಲ್ಟರೇ ಕಿತ್ತು ಹೋದಾಗ ಏನಾಗ ಬಹುದು? ನಿಮಗೆ ಯಾರಾದ್ರು ತರಲೆ ಪ್ರಶ್ನೆ ಕೇಳಿದ್ರೆ ನೀವು ಏನಂತಾ ಉತ್ತರ ಕೊಡಬಹುದು? ಇದು 1 ಈಮೇಲ್ ಪಾರ್‌ವಾರ್ಡ್ ಮತ್ತು 1 ಎಸ್.ಎಂ.ಎಸ್ ಎರಡರ ಆಧಾರದ ಮೇಲೆ ಬರೆದಿದ್ದು. ಮುಂದೆ ಓದಿ ನೋಡಿ..ಹೇಗಿದೆ ಅಂತಾ ಹೇಳಿ.
---------------------------------------------------------------------------------------
ನೀವು ಪರೀಕ್ಷೆಲಿ ಉತ್ತರ ಬರೀತಾ ಇರ್ತೀರಾ. ಟೀಚರ್ ಹತ್ತಿರ ಬಂದಾಗ ಕೇಳ್ತಾರೆ.
ಅವರು ಕೇಳ್ತಾರೆ: ಏನಪ್ಪಾ ಚೆನ್ನಾಗಿ ಓದಿದ್ದೀಯಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ನಿಮ್ಮ ಸಿಲಾಬಸ್ಸು, ನಿಮ್ಮ ಇಂಟರ್ನಲ್ಸು, ನಿಮ ಎಕ್ಸಾಮು, ಈ ಬಿಕನಾಸಿ ಮಾರ್ಕ್ಸು, ನಮ್ ಟೈಮು, ಆ ರಾಸ್ಕಲ್ ಫೆಕಲ್ಟಿ ಸದ್ದು ಎಲ್ಲಾ ಮಿಕ್ಸ್ ಆಗಿ ನನ್ ಲೈಫಲ್ಲೇ ರಿಪೇರಿ ಮಾಡೋಕ್ಕಾಗದೇ ಇರೋ ಗಾಯ ಮಾಡಿದೆ....ನನಗೆ ಗೊತ್ತಾಗೊಯ್ತು ಕಣ್ರಿ ನಾನು ಪಾಸ್ ಆಗಲ್ಲಾ ಅಂತಾ. ಬಿಟ್ಕೊಟ್ಟು ಬಿಟ್ಟೆ ಕಣ್ರಿ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಹಲ್ಕಿರಿಯುತ್ತಾ) ಪರವಾಗಿಲ್ಲ ಸಾರ್.
---------------------------------------------------------------------------------------
ನೀವು ಬಸ್ಸಲ್ಲಿ ಹೋಗ್ತಾ ಇರ್ತೀರಾ. ಒಬ್ಬ ಡುಮ್ಮಿ ತಮ್ಮ ಹೈ ಹೀಲ್ಡ್ ಹಾಕಿರೋ ಕಾಲಿಂದ ನಿಮ್ಮ ಹವಾಯಿ ಚಪ್ಪಲಿ ಹಾಕಿರೋ ನಿಮ್ಮ ಕಾಲು ಮೆಟ್ಟೇ ಬಿಡ್ತಾಳೆ.
ಅವರು ಕೇಳ್ತಾರೆ: ಪಾಪ ನಿಮಗೆ ಸ್ವಲ್ಪ ನೋವಾಯ್ತೋ ಏನೊ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇಲ್ಲಮ್ಮಾ ಪುಣ್ಯಾತಗಿತ್ತಿ ದೊಡ್ಡ ಉಪಕಾರ ಆಯ್ತು. ಈ ನೋವೂ ಒಂತರಾ ಹಿತವಾಗಿದೆ ಕಣ್ರಿ. ಸಾಕಾಗಿಲ್ಲ ಅಂದ್ರೆ ಮತ್ತೊಮ್ಮೆ ಮೆಟ್ಟಿ ನೋಡ್ರಿ.
\ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಮುಖ ಕಿವಿಚುತ್ತಾ) ಹಾಂ ಸ್ವಲ್ಪ ಆಯ್ತು. ಇರಲಿ ಬಿಡಿ. ಪರವಾಗಿಲ್ಲ. ಏನ್ಮಾಡೊಕ್ಕಾಗುತ್ತೆ.
---------------------------------------------------------------------------------------
ನೀವು ಫಿಲಂ ಥಿಯೇಟರ್ ಬಳಿ ಫಿಲಂ ಟಿಕೆಟ್ ಹಿಡ್ಕೊಂಡು ಓಡಾಡ್ತಾ ಇರ್ತೀರಾ. ಆಗ ನಿಮ್ಮ ಫ್ರೆಂಡ್ ಒಬ್ಬರು ಸಿಗ್ತಾರೆ.
ಅವರು ಕೇಳ್ತಾರೆ: ಏನಪ್ಪಾ ಇಲ್ಲೇನ್ಮಾಡ್ತಾ ಇದ್ದೀಯಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಓಹೋ ಹಾಗಾದ್ರೆ ನಿಮ್ಗೆ ಗೊತ್ತಿಲ್ವಾ.... ನಾನು ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರೋಕೆ ಶುರು ಹಚ್ಕೊಂಡಿದ್ದೀನಿ. ಬೇರೆ ಕೆಲ್ಸಾ ಇಲ್ಲಾ ನೋಡಿ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಹಲ್ಕಿರಿದು) ಹ್ಹೆ ಹ್ಹೆ ಏನಿಲ್ಲಾ ಯಾರೋ ಫಿಲಂ ಚೆನ್ನಾಗಿದೆ ಅಂದ್ರು. ನೋಡೋಣ ಅಂತಾ ಬಂದೆ.
---------------------------------------------------------------------------------------
ನೀವು ಯಾವುದೋ ಹೊಟೇಲ್ ವೇಟರ್ ಆಗಿದ್ದೀರಾ. ಯಾರೋ ಗಿರಾಕಿ ಬರ್ತಾರೆ.
ಅವರು ಕೇಳ್ತಾರೆ: ಸ್ವಾಮಿ ನಿಮ್ಮ ಹೋಟೆಲ್‌ನಲ್ಲಿ ಊಟ ಚೆನ್ನಾಗಿರುತ್ತೋ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಛೆ ಛೆ ಎಲ್ಲಾದರೂ ಉಂಟೇ? ತುಂಬಾ ಕೆಟ್ಟದಾಗಿರುತ್ತೆ. ನಾವು ಪಾತ್ರೆನೂ ಸರಿಯಾಗಿ ತೊಳೆಯಲ್ಲ. ಕೆಲವೊಮ್ಮೆ ನಾವು ತಿಂದು ಬಿಟ್ಟದ್ದನ್ನೂ ಕೊಡ್ತೀವಿ. ಕೊಡ್ಲಾ?
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಒಮ್ಮೆ ತಿಂದು ನೋಡಿ ಸಾರ್. ಮತ್ತೆ ನೀವು ಈ ಹೊಟೇಲ್ ಬಿಟ್ಟು ಬೇರೆಲ್ಲೂ ಊಟಾನೇ ಮಾಡಲ್ಲ.ಕೂತ್ಕೋಳಿ ಸಾರ್. ಬಿಸಿ ಬಿಸಿಯಾದ ಊಟ ತರ್ತೀನಿ.
----------------------------------------------------------------------------------------
ನೀವು ನಿಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಗೆಳೆಯನಿಗೆ ಕೊಡ್ತೀರಾ.
ಅವರು ಕೇಳ್ತಾರೆ: ಏಯ್ ನೀನು ಮದುವೆ ಆಗ್ತೀರೋ ಹುಡುಗಿ ಚೆನ್ನಾಗಿದ್ದಾಳಾ? ಒಳ್ಳೆಯವಳಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಖಂಡಿತಾ ಇಲ್ಲಾ. ಶೂರ್ಪನಖಿಯ ತಂಗಿ ಇದ್ದ ಹಾಗೆ ಇದ್ದಾಳೆ. ಬೀದಿಗೊಂದು ಬಾಯ್‌ಫ್ರೆಂಡ್‌ಗಳೂ ಇದ್ರಂತೆ. ಏನ್ಮಾಡೋದು ಅವಳಪ್ಪ ಕೋಟ್ಯಾದೀಶ. ಬಿಡೋಕಾಗತ್ಯೆ?
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಹೌದು ಕಣೋ. ಇಂತಹ ಹುಡುಗಿ ಸಿಗಬೇಕು ಅಂದ್ರೆ ನೂರು ಜನ್ಮದ ಪುಣ್ಯ ಮಾಡಿರಬೇಕು.
-------------------------------------------------------------------------------------------
ಬೆಳಗಿನ ಜಾವ ೩ ಗಂಟೆಗೆ ಯಾರೋ ನಿಮ್ಮನ್ನು ಮನೆಗೆ ಫೋನ್ ಕಾಲ್ ಮಾಡಿ ಎಬ್ಬಿಸುತ್ತಾರೆ.
ಅವರು ಕೇಳ್ತಾರೆ: ಛೆ ಛೆ ಸುಮ್ನೆ ತೊಂದ್ರೆ ಕೊಟ್ಟೆ ಮಲಗಿ ಬಿಟ್ಟಿದ್ರಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇಲ್ಲ ಇಲ್ಲ ಸುಮ್ಮನೆ ಬೇಜಾರು ಬರುತ್ತೆ ಅಂತಾ ಕಳ್ಳ ಪೋಲಿಸ್ ಆಟ ಆಡ್ತಾ ಇದ್ವಿ. ಅಂತೂ ಫೋನ್ ಮಾಡಿದ್ರಲ್ಲಾ. ತುಂಬಾ ಸಂತೋಷ. ಬನ್ನಿ ಬೆಳಕು ಹರಿಯುವವರೆಗೂ ಹರಟೆ ಹೊಡೆಯೋಣ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಛೆ ಛೆ ಹಾಗೇನಿಲ್ಲ ಇನ್ನೇನು ಏದ್ದೇಳು ಹೊತ್ತು. ಹೇಳಿ ಎನು ವಿಷಯ ಅಂತಾ?
------------------------------------------------------------------------------------------
ನೀವು ತಲೆ ಶೇವ್ ಮಾಡಿರೋದು ನೋಡಿ ನಿಮ್ಮ ಗೆಳೆಯರು ನೋಡ್ತಾರೆ.
ಅವರು ಕೇಳ್ತಾರೆ: ಓಹೋ ತಲೆ ಶೇವ್ ಮಾಡಿಸ್ಕೋಂಡ್ರಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇದು ಬೇಸಿಗೆ ಕಾಲ ಅಲ್ವಾ ಎಲ್ಲಾ ಉದುರಿ ಹೋಗಿದೆ. ಮುಂದೆ ಮಳೆಗಾಲದಲ್ಲಿ ಚಿಗುರು ಬಿಡುತ್ತೆ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ:(ಸ್ವಲ್ಪ ನಾಚುತ್ತಾ) ಹೌದು ಕಣ್ರಿ ಸ್ವಲ್ಪ ಚೇಂಜ್ ಇರಲಿ ಅಂತಾ.
-----------------------------------------------------------------------------------------

ಹಳೇ ಸ್ಟಾಕ್ ಗಳು -11

ಅವಳು ಗುಣದಲ್ಲಿ
ಅಪರಂಜಿ
ಅವಳು ನೆಡತೆಯಲಿ
ಸಿಹಿಗಂಜಿ
ಪ್ರಿತಿಮಾಡಲು ಒಪ್ಪುತ್ತಿಲ್ಲ
ಅವಳಪ್ಪನಿಗೆ ಅಂಜಿ

================

-: ನಿನ್ನ ನಗೆ :-
ಹುಡುಗಿ
ತೃಣವಾದರು
ಸೂರ್ಯ
ಚಂದ್ರರು
ನಿನ್ನ
ಮೋಹಕ
ನಗೆಯಲಿ,
 
=================

-: ನೆನಪು :-
ಬೆಳಿಗ್ಗೆ ನಾನು ಏನನ್ನೂ ತಿನ್ನಲಿಲ್ಲ,
ಮಧ್ಯಾಹ್ನ ___ ರಾತ್ರಿ ಕೂಡ
ಯಾಕೆಂದರೆ ಆಗೆಲ್ಲ ನಿನ್ನದೇ ನೆನಪು,
ರಾತ್ರಿ ನಿದಿರೆ ಕೂಡ ಮಾಡಲಿಲ್ಲ
ಯಾಕೆಂದರೆ ಹಸಿವು ಬಿಡಲಿಲ್ಲ!
 
 
================
 
-: ಕವಿತೆ :-
ನೀ ಬಂದವಳೇ
ಮನದಿ ಮೆಲ್ಲನೆ
ಅವಿತೆ
ಪರಿಣಾಮ
ಹುಟ್ಟಿತು ನನ್ನಿಂದ
ಹಲವಾರು
ಕವಿತೆ!
 

ಕವನಗಳು

ಹೊತ್ತು ಗೊತ್ತಿಲ್ಲದೆ
ಹೊಳೆಯುತ್ತವೆ ಕವನಗಳ ಸಾಲು
ಭಾಷೆಗಳಲ್ಲಿ ಬಂದಿಸೋಣವೆಂದರೆ
ಬಹುಬೇಗ ಮರೆಯಾಗಿ ಬಿಡುತ್ತವೆ
ರಸ್ತೆಯಲ್ಲಿ ಸಿಕ್ಕು ನಕ್ಕು ಮಿಂಚಿ
ಮರೆಯಾಗುವ ಹುಡುಗಿಯ ಹಾಗೆ,

ಮೂಕ

ಹೇಗೆ ಹೇಳಲಿ ನಾ ನಿನ್ನ
ಪ್ರೀತಿಸುತ್ತೆನೆ ಎಂದು
ಚೆಲುವೆ ?
ಮೂಕನಾಗಿ
ಮಾಡಿಬಿಟ್ಟ ನನ್ನ
ಆ ದೇವರು
ಹುಟ್ಟಿದ ದಿನವೆ !

ಕಾಯುವೆ

ಗೆಳತಿ...
ಕನಸಿನಲ್ಲಿ ಬರುವೆಯಾ?
ಎಚ್ಚರವಾಗಲಾರೆ
ನೀ_ ಕನಸಾಗಬೇಡ

ಮುಂದಿನ ಜನ್ಮದಲ್ಲಿ ಸಿಗುವೆಯಾ ?
ಈಗಲೇ ಕಣ್ಮುಚ್ಚುವೆ
ಈ ಪ್ರೀತಿಮರೆಯಬೇಡ ,

ಕಾರಣ


'ಒಲ್ಲೆ' ಎಂದವಳ
ಮನದಲಿ
ಏನಿದೆಯೆಂದು
ನಾ ನಿಜಕ್ಕೂ 'ಬಲ್ಲೆ'
ನನ್ನಲ್ಲಿ
ಪ್ರೀತಿಯಿದ್ದಿದ್ದರೆ
ಅವಳಾಗುತ್ತಿರಲಿಲ್ಲ
ಇನ್ನೂಬ್ಬನ 'ನಲ್ಲೆ'

             ----ಒಂಟಿಪ್ರೇಮಿ

ಹಳೆಯ ಸ್ಟಾಕ್ ಗಳು -10

-:ಅನಿವಾರ್ಯ:-

ಗೆಳತಿ
ಬಾನ
ಚುಕ್ಕಿಗಳು
ಬೇಕೇ ಬೇಕು
ನೀನಿರದ
ಇರುಳಲ್ಲಿ
ನನ್ನೆದೆಗೆ
ಬೆಳಕ
ತುಂಬಲು.

====================

-:ಪ್ರೀತಿ:-

ಗೆಳತೀ ಬೆಳದಿಂಗಳ
ರಾತ್ರಿಯ ಮೇಲಾಣೆ
ನಾನು ಸತ್ತಾಗ
ಮುಚ್ಚಿದ ಕಣ್ಣಂಚಲ್ಲೂ
ಹೆಪ್ಪುಗಟ್ಟಿದ ಹನಿಯೊಂದು
ಹೊಳೆಯುತ್ತಿರುತ್ತದೆ
ನಿನ್ನ ಪ್ರೀತಿಗಾಗಿ, 

===================

-:ಒಂದು:-

'ನಾನು' ನೀನಾಗಿ
'ನೀನು' ನಾನಾಗಿ
ಯೋಚಿಸಿದ ಹೊತ್ತು
ಒಂದಾಗ ಬಹುದು
ಈ ಜಗತ್ತು

==================

 -:ಬಳುಕ ಬೇಡ:-

ಬಳ್ಳಿಯ
ಕುಸುಮದಂತೆ
ರಾತ್ರಿಯಲ್ಲಿ
ಬಳುಕ ಬೇಡವೇ
ಚಲುವೆ
ಏಕೆಂದರೆ
ಬೆಳದಿಂಗಳಲ್ಲಿ ಮರೆಯಾಗಿರುವ ಆ ಸೂರ್ಯ
ಮತ್ತೆ ಉದಯಿಸಿ ಬಿಟ್ಟಾನು ನಿನ್ನ ನೋಡಿದ
ಕ್ಷಣವೇ !

ನಾ ನಿನ್ನ ಕಣ್ಣೀರಾದರೆ

ನಾ ನಿನ್ನ
ಕಣ್ಣೀರಾದರೆ
ನಿನ್ನ ಕೆನ್ನೆಮೇಲಿಂದ
ಇಳಿದು
ತುಟಿಯಂಚಿನಲಿ
ಸಾಯುವೆ
ನೀ ನನ್ನ
ಕಣ್ಣೀರಾದರೆ ನಾ
ಅಳುವುದೇ ಇಲ್ಲ
ನಿನ್ನ ಕಳೆದುಕೊಳ್ಳುವ
ಭಯದಿಂದ.


                            --- ಒಂಟಿಪ್ರೇಮಿ

ಹಳೇ ಸ್ಟಾಕ್ ಗಳು -9

ಅಂದು
ನಿನ್ನ ಕಣ್ಣಂಚಿನಲಿ
ಪ್ರೀತಿ ಹರಿದು
ಬಂತು
ಇಂದು
ನೆನಪುಗಳನ್ನು
ಎಣಿಸುತ್ತಿದ್ದೆನೆ
ಏಕಾಂಗಿಯಾಗಿ
ಕುಳಿತು.

--------------

ಹೇಗಿದ್ದಿಯಾ? ಎಂದು
ಇಂದು ಕೇಳುತ್ತಿದ್ದಿಯಲ್ಲ
ನೆನಪಿಲ್ಲವೇ?
ಪ್ರೀತಿಯ
ಶವದ ಪೆಟ್ಟಿಗೆಗೆ
ನೀನೇ
ಕೊನೆಯ ಮೊಳೆ ಹೊಡೆದದ್ದು

-----------
ಸೊಗಸಾದ ಸವಿಸಂಜೆಯಲಿ
ಕೆಂಪಾದ ಸೂರ್ಯ ತಂಪಾಗುವ ವೇಳೆಯಲಿ
ನನ್ನವಳು-ನಾನು ಕಡಲ ತೀರದಲಿ

ಕೇಳಿದಳು ನನ್ನಾಕೆ; ಎಷ್ಟು ಪ್ರೀತಿಸುವೆ ನನ್ನನ್ನು?
ಸಾಗರದಾಳ, ಭೂಮಿಯಗಲ, ಆಕಾಶದೆತ್ತರ.....
ಎಂದ್ಹೇಳಲಿಲ್ಲ ನಾನು

ಅನ್ನದ ಅಕ್ಕಿಯಷ್ಟೆಂದೆ,ರಾಗಿಯ ಕಾಳಷ್ಟೆಂದೆ
ಏಕೆಂದರೆ ಅದಿಲ್ಲದೆ ಬದುಕಿಲ್ಲ
ಬದುಕಲು ಸಾದ್ಯವಿಲ್ಲ!

-------------
ಮುಗ್ಗರಿಸಿ ಬಿದ್ದಾಗಲೆಲ್ಲಾ
ಎದ್ದುಮತ್ತೆ
ನೆಡೆಯುವ ಛಲ
ಮಗುವಿಗೆ
ಬೀಳುವುದೆಂದರೆ
ಎಲ್ಲಿಲ್ಲದ ಅವಮಾನ
ನನಗೆ

_______ _______

ಸೇರದಾಗಿದೆ ಊಟ
ದೂರ ಓಡಿದೆ ನಿದ್ದೆ
ನೀ ಬರುವ ಮೊದಲು
ನಾ ಚೆನ್ನಗಿಯೇ ಇದ್ದೆ
ತಪ್ಪೆಲ್ಲವೂ ನಿನ್ನದೆ ಗೆಳತಿ
ನೀನೇಕೆ ನನ್ನ ಮನಸ್ಸನ್ನು ಕದ್ದೆ?


_______ _______

ಭೂಮಿ-ಆಕಾಶವನ್ನು
ನನ್ನ ಹೆಸರಿಗೆ ಬರೆದರೂ
ಬೇಡ ನನಗೆ
ಹೃದಯ ಬಯಸುವ
ನೀನೊಬ್ಬಳೆ ಸಿಕ್ಕರೆ
ಸಾಕೆನಗೆ

...............................


ಸೂರ್ಯನಿರುವನು
ಹಗಲಿಗೆ
ಚಂದ್ರನಿರುವನು
ಇರುಳಿಗೆ
ಹಗಲಿರುಳು
ನೀನು
ನನ್ನ ಬಾಳಿಗೆ

Wednesday, June 13, 2012

ಅತಿಶಯೋಕ್ತಿ

'ನೀ ನಿಲ್ಲದೇ
ನಾನಿಲ್ಲ'ವೆಂಬುದು
ಅತಿಶಯೋಕ್ತಿಯಾಗಬಹುದು..

ಆದರೆ

ನೋವಿಲ್ಲದೇ ನಾನಿರುವುದು
ಅಪ್ಪಟ ಸುಳ್ಳು...........

                ---- ಒಂಟಿಪ್ರೇಮಿ

Tuesday, June 12, 2012

ಸಾವಲ್ಲೂ ಒಂದಾಗುವುದೆಂದರೆ ಇದೇನಾ?

ಜಗತ್ತಿನಲ್ಲಿ ಪ್ರೀತಿ ಎಂದೆಂದಿಗೂ ಶಾಶ್ವತ...
ಅದಕ್ಕೆ ನಿದರ್ಶನವಾಗಿ ಈ ಪೋಟೋವನ್ನು ಗಮನಿಸಿ
ಸುಮಾರು 6000 ವರ್ಷಗಳಷ್ಟು ಹಳೆಯದಾದ ಈ ಯುವ ಪ್ರೇಮಿಗಳ ಅಸ್ತಿಪಂಜರಗಳು ಇಟಾಲಿಯಲ್ಲಿ  ದೊರೆತಿವೆ.ಇವು 18 ರಿಂದ 21 ವರ್ಷದ ಯುವತಿ ಮತ್ತು ಯುವಕನದ್ದು ಎಂದು ಸಂಶೋದನೆಗಳು ಹೇಳುತ್ತಿವೆ

ಸಾವಲ್ಲೂ ಒಂದಾಗುವುದೆಂದರೆ ಇದೇನಾ?

ನಿನ್ನ ಪ್ರೀತಿಸೋಕೆ ಕಾರಣ

ಹುಡುಗಿ ನೀನು ನನ್ನ ದೂರ ಮಾಡೋಕೆ
ನೂರು ಕಾರಣ ಹೇಳ ಬಹುದು

ನಾ ನಿನಗೆ ಹತ್ತಿರವಾಗೋಕೆ
ಒಂದೇ ಕಾರಣ

ನಿನ್ನ ಪ್ರೀತಿ ಇಲ್ಲದೆ ನಾ ಬದುಕೋಕಾಗಲ್ಲ.

                                           -----ಒಂಟಿಪ್ರೇಮಿ


=========================

"ಜೀವನದ ಪ್ರತಿಯೊಂದು ವಿಷಯದಿಂದಲೂ
ಪಾಠ ಕಲಿಬೇಕು" ಅಂತಾರೆ
ಯಾವಾಗ್ಲೂ ಪಾಠ ಕಲಿತಾ ಹೋದ್ರೆ
ಎಕ್ಸಂ ಬರೆಯೋದು ಯಾವಾಗ?
 

Monday, June 11, 2012

ತಾಜ್ ಮಹಲ್ ಅಥವಾ ತೇಜೋ ಮಹಲ್ ?


Aerial view of the Taj Mahal.
  ole0.jpg
The interior water well
 ole1.jpg
Frontal view of the Taj Mahal and dome
ole2.jpg
Close up of the dome with pinnacle
ole3.jpg
Close up of the pinnacle
ole4.jpg
Inlaid pinnacle pattern in courtyard
ole5.jpg
Red lotus at apex of the entrance
ole6.jpg
Rear view of the Taj & 22 apartments
ole7.jpg
View of sealed doors & windows in back
ole8.jpg
Typical Vedic style corridors
ole9.jpg
The Music House–a contradiction
ole10.jpg
A locked room on upper floor
ole11.jpg
A marble apartment on ground floor
ole12.jpg
The OM in the flowers on the walls
ole13.jpg
Staircase that leads to the lower levels
ole14.jpg
300 foot long corridor inside apartments
ole15.jpg
One of the 22 rooms in the secret lower level
ole16.jpg
Interior of one of the 22 secret rooms
ole17.jpg
Interior of another of the locked rooms
ole18.jpg
Vedic design on ceiling of a locked room
ole19.jpg
Huge ventilator sealed shut with bricks
ole20.jpg
Secret walled door that leads to other rooms
ole21.jpg
Secret bricked door that hides more evidence
ole22.jpg
Palace in Barhanpur where Mumtaz died
ole23.jpg
Pavilion where Mumtaz is said to be buried
ole24.jpg
ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ “ ತಾಜ್ ಮಹಲ್- ಒ೦ದು ಸತ್ಯ ಕಥೆ“ ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ ಪುರಾತನ ಪವಿತ್ರ ಕ್ಷೇತ್ರವಾಗಿತ್ತು.ಅದು “ತೇಜೋ ಮಹಾಲಯ“ ಎ೦ದು ಕರೆಯಲ್ಪಡುವ ಶಿವ ಕ್ಷೇತ್ರವಾಗಿತ್ತು.ತಮ್ಮ ಸ೦ಶೋಧನೆಯ ಹಾದಿಯಲ್ಲಿ ಓಕ್ ತೇಜೋ ಮಹಾಲಯವನ್ನು ಆಗ ಜೈಪುರದ ರಾಜನಾಗಿದ್ದ ಜೈಸಿ೦ಗ್ ನಿ೦ದ ಕಿತ್ತುಕೊಳ್ಳಲಾಗಿತ್ತು ಎ೦ಬ ಸತ್ಯವನ್ನು ನಮೂದಿಸುತ್ತಾರೆ.ತನ್ನ “ಬಾದಶಹನಾಮ“ದಲ್ಲಿ ಸ್ವತಹ ಷಾಹಜಹಾನ್ ರಾಜಾ ಜೈಸಿ೦ಗ್ ನಿ೦ದ ಆಗ್ರಾದ ಒ೦ದು ವೈಭವೋಪೇತ ಹಾಗೂ ಸು೦ದರ ಅರಮನೆಯನ್ನು ಮುಮ್ತಾಜಳ ಶವಸ೦ಸ್ಕಾರಕ್ಕೆ ಪಡೆದದ್ದನ್ನು ನಮೂದಿಸಿದ್ದಾನೆ.ಜೈಪುರದ ಮಾಜಿ ಮಹಾರಾಜರು ತನ್ನ ರಹಸ್ಯ ಸ೦ಗ್ರಹದಲ್ಲಿ ಷಾಹಜಹಾನ್ ತಾಜ್ ಕಟ್ಟಡವನ್ನು ಅವನಿಗೊಪ್ಪಿಸುವ೦ತೆ ನೀಡಿದ ಎರಡು ಆಜ್ನಾಪನಾ ಪತ್ರಗಳನ್ನು ಸ೦ಗ್ರಹಿಸಿಟ್ಟುಕೊ೦ಡಿದ್ದಾರೆ. ತಾವು ವಶಪಡಿಸಿಕೊ೦ಡ ದೇವಾಲಯಗಳನ್ನು ಹಾಗೂ ಅರಮನೆಗಳನ್ನು ತಮ್ಮ ನಿಷ್ಠಾವ೦ತರ ಹಾಗೂ ಅರಮನೆಯ ಪ್ರಜೆಗಳ ಶವಸ೦ಸ್ಕಾರಕ್ಕೆ ಬಳಸುವ ಪಧ್ಢತಿ ಮುಸಲ ದೊರೆಗಳಲ್ಲಿತ್ತು ಎ೦ಬುದನ್ನು ಇತಿಹಾಸವೇ ಹೇಳುತ್ತದೆ. ಹುಮಾಯೂನ್, ಅಕ್ಬರ್, ಇತ್ಮುದ್-ಉದ್-ದೌಲಾ ಹಾಗೂ ಸಫ್ದರ್ ಜ೦ಗ್ ಮು೦ತಾದವರ ಶವಸ೦ಸ್ಕಾರಗಳು ಇ೦ತಹ ವಶಪಡಿಸಿಕೊ೦ಡ ಅರಮನೆಗಳಲ್ಲಿಯೇ ಎ೦ಬುದನ್ನು ಇತಿಹಾಸ ಹೇಳುತ್ತದೆ.
ಪ್ರೊ|| ಓಕ್ ತಮ್ಮ ಸ೦ಶೋಧನೆಯನ್ನು “ತಾಜ್ ಮಹಲ್“ ಎ೦ಬ ಪದದಿ೦ದ ಆರ೦ಭಿಸುತ್ತಾರೆ. ಅವರ ಪ್ರಕಾರ ಆಫ್ಘಾನಿಸ್ಥಾನದಿ೦ದ ಆಲ್ಜೀರಿಯಾ ವರೆಗಿನ ಯಾವ ದೇಶಗಳಲ್ಲಿಯೂ ಮುಸಲ ಕಟ್ಟಡವನ್ನು “ಮಹಲ್ “ ಎ೦ದು ಕರೆಯುವುದಿಲ್ಲ. “ ತಾಜ್ ಮಹಲ್ “ ಎನ್ನುವ ಪದವು “ ಮುಮ್ತಾಜ್ ಮಹಲ್ “ ಎನ್ನುವ ಪದದಿ೦ದ ಉತ್ಪತ್ತಿಯಾದುದೆ೦ಬ ಇತಿಹಾಸಕಾರರ ವಾದವನ್ನು ಎರಡು ರೀತಿಯಲ್ಲಿ ಪ್ರೊ|| ಓಕ್ ಖ೦ಡಿಸುತ್ತಾರೆ.
೧. ಮುಮ್ತಾಜಳ ನಿಜವಾದ ಹೆಸರು “ ಮುಮ್ತಾಜ್-ಉಲ್- ಮಹಾನಿ“ ಯೇ ವಿನ: “ ಮುಮ್ತಾಜ್ ಮಹಲ್ “ ಎ೦ದಲ್ಲ.
೨.ಯಾರೂ ಸಹ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳತಕ್ಕ೦ಥಹ ಕಟ್ಟಡವನ್ನು ನಿರ್ಮಿಸಿ, ಅದಕ್ಕೆ ಹೆಸರಿಡುವಾಗ ನಿಜವಾದ ಹೆಸರಿನ ಮೊದಲ ಮೂರಕ್ಷರ ಬಿಡುತ್ತಾರೆಯೇ? ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎ೦ದಿಡುತ್ತಾರೆಯೇ? ಎ೦ಬುದು ಪ್ರೊ|| ಓಕ್ ಪ್ರಶ್ನೆ. ಅವರ ಪ್ರಕಾರ ಈ ತಾಜ್ ಮಹಲ್ ಎನ್ನುವ ಪದವು “ ತೇಜೋ ಮಹಾಲಯ“ ಎ೦ಬ ನಿಜವಾದ ಪದದ ಭ್ರಷ್ಟ ರೂಪ (ಕರಪ್ಟೆಡ್ ಟರ್ಮ್). ತೇಜೋ ಮಹಾಲಯವು ತಾಜ್ ಮಹಲ್ ಆಗಿ ಭ್ರಷ್ಟಗೊ೦ಡಿತು ಎ೦ಬುದು ಸತ್ಯವಾದುದು. ಪ್ರೊ|| ಓಕ್ ನಾವೆಲ್ಲಾ ಅಧ್ಭುತ ಪಡುವ ಷಾಹಜಹಾನ್ ಮತ್ತು ಮುಮ್ತಾಜರ ಪ್ರೇಮ ಕಥೆಯ ಅಸ್ತಿತ್ವವೇ ಇಲ್ಲವೆ೦ಬುದನ್ನು ಹೇಳುತ್ತಾರೆ. ಅವರ ಪ್ರಕಾರ, ಅವರಿಬ್ಬರ ಪ್ರೇಮಕಥೆಯು ಷಾಹಜಹಾನನ ಆಸ್ಥಾನ ಕವಿಗಳ/ಲೇಖಕರ, ಇತಿಹಾಸಕಾರರ ಮತ್ತು ಪ್ರಾಕ್ತನ ಸ೦ಶೋಧಕರ ಕಟ್ಟುಕಥೆಯಲ್ಲದೆ ಬೇರೇನಲ್ಲ. ಷಾಹಜಹಾನನ ಕಾಲದ ಯಾವುದೇ ಆಸ್ಥಾನ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊ|| ಓಕ್ ಈ ಸ೦ದರ್ಭದಲ್ಲಿ ಸೂಚಿಸುತ್ತಾರೆ.ಅಲ್ಲದೆ ಓಕ್ ತಾಜ್ ಮಹಲ್ ಕಟ್ಟಡವು ಷಾಹಜಾನನ ಕಾಲಕ್ಕಿ೦ತಲೂ ಮು೦ಚಿನದ್ದೆ೦ದೂ,ಅಲ್ಲಿ ಆಗ್ರಾದ ರಜಪೂತರಿ೦ದ ಪೂಜಿಸಲ್ಪಡುತ್ತಿದ್ದ, ಈಶ್ವರ ದೇವರ ದೇವಾಲಯವಿತ್ತೆ೦ಬುದಕ್ಕೆ ಹಲವಾರು ದಾಖಲೆಗಳನ್ನು ನೀಡುತ್ತಾರೆ. ಉದಾಹರಣೆಗೆ,
 ೧. ನ್ಯೂಯಾರ್ಕಿನ ಪ್ರೊ|| ಮರ್ವಿನ್ ಮುಲ್ಲರ್ ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆಗೆ ಇರುವ ಬಾಗಿಲಿನ ಅವಶೇಷಗಳನ್ನು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿ೦ತ ೩೦೦ ವರ್ಷ ಹಳೆಯವು ಎ೦ಬುದನ್ನು ಖಾತ್ರಿಗೊಳಿಸಿವೆ.
೨.ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವವ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.
೩.ಮುಮ್ತಾಜ್ ಮರಣದ ಒ೦ದು ವರ್ಷದೊಳಗೆ ಆಗ್ರಾಕ್ಕೆ ಭೇಟಿ ಕೊಟ್ಟಿದ್ದ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗ ಷಹಜಹಾನ್ ಸಮಯಕ್ಕಿ೦ತಲೂ ಮೊದಲಿನಿ೦ದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆ೦ಬುದನ್ನು ಉಲ್ಲೇಖಿಸುತ್ತಾನೆ.
೪. ತಾಜ್ ಕಟ್ಟಡವು ಪೂರ್ವದಲ್ಲಿ ಒ೦ದು ಹಿ೦ದೂ ನಿರ್ಮಾಣವಾಗಿತ್ತೆ೦ಬುದನ್ನು ಖಾತ್ರಿಗೊಳಿಸಲು, ಓಕ್ ತಾವು ತಾಜ್ ಕಟ್ಟಡದಲ್ಲಿ ಕ೦ಡ ಹಲವು ಕಟ್ಟಡ ನಿರ್ಮಾಣ ಗೊ೦ದಲಗಳು ( ಹಿ೦ದೂ ಮತ್ತು ಮುಸ್ಲಿಮ್ ಕಟ್ಟಡಗಳ ಎರಡೂ ಶೈಲಿ) ಮತ್ತು ನಮೂನೆಗಳತ್ತ ಬೊಟ್ಟು ಮಾಡುತ್ತಾರೆ. ತಾಜ್ ಕಟ್ಟಡದ ಗೊಮ್ಮಟದ ಮೇಲಿನ ಕಲಶದ ಚಿತ್ರ,ರಾಜಸಭಾ೦ಗಣದ ಗೋಡೆಯಲ್ಲಿ ಬಿಡಿಸಲಾಗಿರುವ ಕಲಶದ ಚಿತ್ರ, ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆ೦ಪು ಕಮಲದ ಚಿತ್ರ, ಸೀಲ್ ಮಾಡಲಾಗಿರುವ ಕೋಣೆಗಳ ಹಿ೦ಬದಿಯ ಚಿತ್ರ, ಪುರಾತನ ವೇದಿಕ ಶೈಲಿಯಲ್ಲಿ ನಿರ್ಮಾಣಗೊ೦ಡ ಕಾರಿಡಾರ್ ಗಳು,ಸೀಲ್ ಮಾಡಲಾದ ಕೊಠಡಿಗಳ ಚಿತ್ರ, ಗೋಡೆಗಳ ಮೇಲೆ ಬರೆಯಲಾದ ಹೂಗಳ ನಡುವಿನ “ ಓ೦“ ಸ೦ಕೇತ, ಸೀಲ್ ಮಾಡಲಾದ ರೂ೦ ಗಳ ಮೇಲ್ಛಾವಣಿಗಳ ಮೇಲೆ ಬಿಡಿಸಲಾದ ವೇದಿಕ ಶೈಲಿಯ ಚಿತ್ತಾರಗಳು ತಾಜ್ ಮಹಲ್ ಹಿ೦ದೂಗಳ ತೇಜೋ ಮಹಾಲಯವಾಗಿತ್ತು ಎ೦ಬುದನ್ನು ಪುಷ್ಟೀಕರಿಸುತ್ತವೆ.ಇವತ್ತಿಗೂ ತಾಜ್ ಕಟ್ಟಡದ ಕೆಲವು ಬೀಗ ಹಾಕಲಾಗಿರುವ ಕೊಠಡಿಗಳತ್ತ ಪ್ರೊ|| ಓಕ್ ಕೈ ತೋರಿಸುತ್ತಾರೆ.  ಅವುಗಳು ಷಹಜಹಾನನ ಕಾಲದಿ೦ದಲೂ ಬೀಗ ಹಾಕಲ್ಪಟ್ಟಿದ್ದು, ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗಿನ ವಾಸ್ತವಾ೦ಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೊಠಡಿಗಳ ರಹಸ್ಯ ಇವತ್ತಿಗೂ ಕಾಪಾಡಲ್ಪಟ್ಟಿದೆ. ಆ ಕೊಠಡಿಗಳಲ್ಲಿ ರು೦ಡವಿರದ ಶಿವನ ಮೂರ್ತಿ ಹಾಗೂ ಹಿ೦ದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಒಳಗೊ೦ಡಿರಬಹುದೆ೦ದು ಪ್ರೊ|| ಓಕ್ ಸ೦ಶಯ ವ್ಯಕ್ತಪಡಿಸುತ್ತಾರೆ.
ರಾಜಕೀಯ ತುಮುಲ ಏರ್ಪಡುವ ಸನ್ನಿವೇಶ ಉ೦ಟಾಗುವ ಹೆದರಿಕೆಯಿ೦ದ ಇ೦ದಿರಾಜಿಯವರ ಸರ್ಕಾರ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪ್ರೊ|| ಓಕ್ ರ ಪುಸ್ತಕದ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಿತಲ್ಲದೆ, ಪುಸ್ತಕ ಪ್ರಕಾಶಕರಿಗೂ ಆ ಪುಸ್ತಕದ ಪ್ರಕಟಣಾ ಕಾರ್ಯವನ್ನು ನಿಲ್ಲಿಸುವ೦ತೆ ಆದೇಶಿಸಿತು. ಕೆಲವು ಪ್ರಕಾಶಕರಿಗೆ ಜೀವ ಭಯದ ಬೆದರಿಕೆಯನ್ನೊಡ್ಡಿತು.
 ಉಪಸ೦ಹಾರ:
 ಪ್ರೊ|| ಓಕ್ ರ ಸ೦ಶೋಧನೆಯ ಸತ್ಯವನ್ನು ನಿರಾಕರಿಸಲು ಯಾ ಪುರಸ್ಕರಿಸಲೊ೦ದೇ ದಾರಿ. ಪ್ರಸಕ್ತ ಸರಕಾರವು ವಿಶ್ವಸ೦ಸ್ಥೆಯ ಅಧಿಕಾರಿಗಳ ಸಮಕ್ಷಮದಲ್ಲಿ ತಾಜ್ ಮಹಲ್ ನ ಬೀಗ ಹಾಕಲಾಗಿರುವ ಕೊಠಡಿಗಳನ್ನು ತೆರೆದು, ಅ೦ತರರಾಷ್ತ್ರೀಯ ಪರಿಣಿತರಿಗೆ ಅದನ್ನು ಪರಿಶೋಧಿಸಲು ಅವಕಾಶ ನೀಡಬೇಕು ಎ೦ಬ ದಾರಿಯೊ೦ದೇ ಬಾಕಿ ಉಳಿದಿರುವುದು.
 ಸ್ವಾತ೦ತ್ರ್ಯಾ ಪೂರ್ವ ಹಾಗೂ ನ೦ತರದ ಭಾರತದ ಇತಿಹಾಸ ಎಷ್ಟು ಬೊಗಳೆಗಳನ್ನು ಒಳಗೊ೦ಡಿದೆ ಎ೦ಬುದನ್ನು ತಾಜ್/ತೇಜೋಮಹಾಲಯ ಕಟ್ಟಡ ಬಹಿರ೦ಗಗೊಳಿಸುತ್ತದೆ. ನಾವೂ ಹಾಗೂ ನಮ್ಮ ಮಕ್ಕಳು ಓದುತ್ತಿರುವುದು ಬಾರತದ ಸುಳ್ಳು ಇತಿಹಾಸವಲ್ಲವೇ? ನಾವು ಓದಿರುವುದು ಹಾಗೂ ಓದುತ್ತಿರುವುದು ಭಾರತದ ಅರೆಬೆ೦ದ ಇತಿಹಾಸ. ಸ್ವಾತ೦ತ್ರ್ಯ ಪೂರ್ವ ಹಾಗೂ ಸ್ವಾತ೦ತ್ರ್ಯಾನ೦ತರದ ಇತಿಹಾಸವನ್ನು ನಮ್ಮ ಸರ್ಕಾರಗಳು ಹೇಗೆ ತಿರುಚಿದವು ಎ೦ಬುದಕ್ಕೆ ಬೇರೆ ಉದಾಹರಣೆ ಬೇಕೆ? ಬಾಬರ್ ಮಸೀದಿಯಾಗಲೀ, ತೇಜೋ ಮಹಾಲಯವಾಗಲೀ ಯಾ ಬೇರಾವುದೇ ಹಿ೦ದೂ ಸ್ಮಾರಕಗಳಾಗಲೀ ಮುಸಲರಿ೦ದ ಖ೦ಡಿಸಲ್ಪಟ್ಟು,ನ೦ತರದ ಮುಸಲರ ಸ್ಮಾರಕವಾಗಿರುವುದರ ಸತ್ಯಾ ಸತ್ಯತೆಯನ್ನು ಏಕೆ ಬಚ್ಚಿಡಬೇಕು? ಓಟ್ ಬ್ಯಾ೦ಕ್ ರಾಜಕಾರಣಕ್ಕೆಯೋ ಯಾ ಅಲ್ಪಸ೦ಖ್ಯಾತರ ಪುರಸ್ಕರಿಸುವುದಕ್ಕೋ? ವಾಜಪೇಯೀ ಸರ್ಕಾರ ಪಠ್ಯ ಪುಸ್ತಕಗಳ ಬದಲಾವಣೆಗೆ ಯಾ ಭಾರತೀಯ ಇತಿಹಾಸದ ಪುನರ್ ರಚನೆಗೆ ಶ್ರಮಿಸಿದಾಗ ಇದೇ ಓಟ್ ಬ್ಯಾ೦ಕ್ ರಾಜಕಾರಣಿಗಳು ಹಾಗೂ ಭಾರತ ರಾಷ್ತ್ರೀಯ ಕಾ೦ಗ್ರೆಸ್ಸು ಹಾಗೂ ಅದರ ಚೇಲಾಗಳು ಎಲ್ಲಿ ತಮ್ಮ ಗುಟ್ಟು ರಟ್ಟಾಗುವುದೋ ಎ೦ಬ ಹೆದರಿಕೆಗೆ  “ಭಾಜಪಾ ಶಿಕ್ಷಣದ ಕೇಸರೀಕರಣ“ಕ್ಕೆ ಮು೦ದಾಗುತ್ತಿದೆ ಎ೦ದು ಬೊಬ್ಬಿಟ್ಟರು. ಹಾಗಾದರೂ ನಮಗೆ ಭಾರತೀಯ ಇತಿಹಾಸದ ಮುಚ್ಚಿಟ್ಟಿದ್ದ ಪುಟಗಳು ತೆರೆಯಲ್ಪಡುತ್ತಿದ್ದವೋ ಏನೋ? ಅದಕ್ಕೂ ಅವಕಾಶವಾಗಲಿಲ್ಲ. ಭಾರತೀಯ ಪ್ರಜ್ನಾವ೦ತ ಪ್ರಜೆಗಳು ಮು೦ದೊಮ್ಮೆ ಐತಿಹಾಸಿಕ ಕ್ರಾ೦ತಿ ನಡೆಸುವುದಕ್ಕಿ೦ತ ಮು೦ಚೆಯೇ ರಾಜಕೀಯ ಪಕ್ಷಗಳು ಒಕ್ಕೊರಲಿ೦ದ ಭಾರತೀಯ ಇತಿಹಾಸದ ಪುನರ್ ರಚನೆಗೆ ಮು೦ದಾಗಬೇಕೆನ್ನುವುದು ನನ್ನ ಹಾಗೂ ನಮ್ಮೆಲ್ಲ ಹಿ೦ದೂಗಳ ಆಶಯ.
http://www.researchfellow.net/ftopic300.html Yes its true. Taj Mahal was a Shiv temple and built 100 years before Shahjahan. I got a forwarded mail stating this information. I thought its spam. With a proper R&D at google, I had to beleive its true.Or do the homework yourself: [1] “The Question of the Taj Mahal” (Itihas Patrika, vol 5, pp. 98-111, 1985) by P. S. Bhat and A. L. Athavale”
[2] “An Architect Looks at the Taj Mahal Legend” by Marvin Mills”
[3] The True Story of the Taj Mahal. This article provides an overview of the research by P. N. Oak Note: This book was banned in India by Indira Gandhi.
[4] Taj Mahal–The True Story (ISBN: 0-9611614-4-2).”
[5] Web Links:
stephen-knapp.com/was_the_taj_mahal_a_vedic_temple.htm
bbc.co.uk/dna/h2g2/A5220
en.wikipedia.org/wiki/Taj_Mahal:_The_True_Story#Further_reading
en.wikipedia.org/wiki/Taj_Mahal#Myths

Wednesday, June 6, 2012

ಬಸವಣ್ಣ ಮಾದಿಗನೇ!! ??

ಹೌದು ಅಚ್ಚರಿಯಾದರೂ ಇದು ಸತ್ಯ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು.ಎಂಬ ಮಾತಿದೆ ಆದರೆ ನಾವು ಯೋಚಿಸ ಬೇಕಾದದ್ದು ಅವರ ಮೂಲ ಜಾತಿಯ ಬಗ್ಗೆ , ಕೆಲವು ಮೂಲಗಳ ಪ್ರಕಾರ ಅವರದು ಮೂಲ ಬ್ರಾಹ್ಮಣ ಕುಟುಂಬ ಎಂಬ ಮಾತಿದೆ  ಆದರೆ ಅದಕ್ಕೆ ತಕ್ಕುದಾದ ಸಾಕ್ಷಿ ಪುರಾವೆಗಳಿಲ್ಲ, ಬಸವಣ್ಣನವರಿಗೆ ಸಂಬಂದಿಸಿದಂತೆ ಎರಡು ಶಾಸನಗಳಲ್ಲಿ ಮಾತ್ರ ಉಲ್ಲೇಖವಿದೆ ಆ ಶಾಸನದಲ್ಲಿ ಉಕ್ತವಾಗಿರುವ 'ಮುನಿಪ' ಸಂಸ್ಕೃತಿಯ ಕುರುಹುಗಳನ್ನು ಹಿಂಬಾಲಿಸಿ, ಅವು ಬಸವಣ್ಣನ ಜಾತಿ ಮೂಲವನ್ನು ಮಾದಿಗ ಕುಲ ಪರಂಪರೆಯತ್ತ ಬೊಟ್ಟು ಮಾಡುತ್ತವೆ, ಕಾಲ ಕ್ರಮೇಣ ರಾಜಕೀಯ ಪ್ರೇರಿತವಾಗಿ ಅಥವಾ ರಾಜಕಾರಣದ ಪ್ರಭಾವ ವಲಯಕ್ಕೆ ಸಿಕ್ಕಿಯೇ, ಮುಂದೆ ರಚಿತಗೊಂಡ ಸಾಹಿತ್ಯದಲ್ಲಿ ಬಸವಣ್ಣ ಬ್ರಾಹ್ಮಣನೆಂದು ನಿರೂಪಿತವಾಗಿರಬಹುದು, ಇದೆಲ್ಲವುಗಳ ಆಧಾರದ ಮೇಲೆ, ಬಸವಣ್ಣನ ಕಾಲದಲ್ಲಿ ಕರ್ನಾಟಕದ ಆ ಪ್ರದೇಶದಲ್ಲ್ಲಿ ಪ್ರಬಲವಾಗಿದ್ದ ಅವೈದಿಕ ಆಗಮ ಶಾಸ್ತ್ರಾಚಾರಗಳಿಗಿದ್ದ (ಕಾಪಾಲಿಕ, ಕಾಳಾಮುಖ ಇತ್ಯಾದಿ) ಸಾಮಾಜಿಕ ಮಾನ್ಯತೆಯ ಹಿನ್ನೆಲೆಯಲ್ಲಿ, ಆತ ಮಾದಿರಾಜನ 'ಕರಸಂಜಾತ'ನಾದ 'ಸಿಸುಮಗ'ನಾಗಿದ್ದುದು ಹೆಚ್ಚು ನಂಬಲರ್ಹ ಸಂಗತಿಯಾಗಿದೆ,
ಬಂಜಗೆರೆ ಜಯಪ್ರಕಾಶರವರು ಬಸವಣ್ಣನವರು ಮಾದಿಗನೆಂಬುದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ,
1. ಬಸವ ಎಂಬ ಹೆಸರು ಮತ್ತು ಅದರ ಏಕವಚನ ಸಂಬೋಧನೆ ಸಂಪೂರ್ಣ ಬ್ರಾಹ್ಮಣೇತರ ಮೂಲದ್ದಾಗಿದೆ ಹಾಗೂ ಬಸವಣ್ಣ ಮಾದಾರ ಚೆನ್ನಯ್ಯನನ್ನು ತನ್ನ ಕುಲದ ಮೂಲಪುರುಷನೆಂದು ತನ್ನ ವಚನಗಳಲ್ಲಿ ಪದೇ ಪದೇ ಮತ್ತು ವಿವಿಧ ರೀತಿ-ನೀತಿಗಳಲ್ಲಿ ನಿವೇದಿಸಿಕೊಂಡಿದ್ದಾನೆ. 
2. ಬಸವಣ್ಣನಿಗೆ ಹುಟ್ಟಿನಲ್ಲೇ ಶಿವದೀಕ್ಷೆಯಾಗಿತ್ತು ಎಂಬ ನಂಬಿಕೆ ಹಾಗೂ ಉಲ್ಲೇಖಗಳು ಆತ 'ದೇವರ ಮಗ'ನೆಂದು ಸೂಚಿಸುತ್ತಿದ್ದು; ಅದು, ಆತ ಆಗಮಶಾಸ್ತ್ರದ ಪ್ರಕಾರ ದೀಕ್ಷೆ ಪಡೆದ ನಂತರವಷ್ಟೇ ಆ ಕಾಲದ ಆಚಾರದಂತೆ 'ಬ್ರಾಹ್ಮಣ'ನಾಗಿ 'ಜಾತ್ಯಂತರ'ನಾದನೆಂಬುದನ್ನೂ ಹೇಳುತ್ತದೆ.
3. 'ಸಿಸು ಮಗ'ನನ್ನು ಪಡೆಯುವ ಆಗಮ ಯೋಗಾಚಾರ, ಮಾತೃಪ್ರಧಾನವಾದ ಮಾದಿಗ ಪರಂಪರೆಗೆ ಸೇರಿದ್ದೆಂಬುದನ್ನು ಸಾಂಸ್ಕೃತಿಕ ಅಧ್ಯಯನಗಳು ದೃಢಪಡಿಸುತ್ತವೆ. ಹಾಗೇ, ಮಾದಲಾಂಬಿಕೆಯ ತಾಯಿಯ ಮನೆ ಇಂತಹ ಯೋಗಾಚಾರದ ಅನೇಕ ಸಿದ್ಧರ ನೆಲೆಯಾಗಿತ್ತು ಎಂಬುದೂ ಚರಿತ್ರೆಯಿಂದ ತಿಳಿದು ಬರುತ್ತದೆ
ಇದಕ್ಕೆ ಪೂರಕವಾಗಿ
ವಾಯುವ್ಯ ಕರ್ನಾಟಕದಲ್ಲಿ ಆಗ ಆರ್ಥಿಕ ಉತ್ಕರ್ಷಕ್ಕೆ ಬಂದಿದ್ದುವೆಂದು ಹೇಳಲಾದ ಕುಶಲಕರ್ಮಿ ಜಾತಿಗಳ ಎಡ ಹಾಗೂ ಬಲ ಪಣಕಟ್ಟುಗಳ ವಿಂಗಡಣೆ ಹಾಗೂ ಆ ವಿಂಗಡಣೆಯ ಪರಿಣಾಮದಿಂದುಂಟಾದ ಜನಿವಾರ ಸಹಿತವಾದ ಹೊಸ ಅಸ್ಪೃಶ್ಯ ಜಾತಿಗಳ ನಿರ್ಮಾಣ; ಕಲ್ಯಾಣ ಕ್ರಾಂತಿಯ ನಂತರ ನಡೆದ ಮಾದೇಶ್ವರ, ಗೋಣಿ ಬಸವೇಶ್ವರ, ಮಂಟೇಸ್ವಾಮಿ, ಮರುಳಸಿದ್ಧರ ನೇತೃತ್ವದ ಕೆಳ ಜಾತಿಗಳ ಆಂದೋಲನದ ಕತೆಗಳು; ಈ ಬಗ್ಗೆ ದೇವ ಚಂದ್ರನ 'ರಾಜಾವಳಿ ಕಥೆ' ನೀಡುವ ಸೂಚನೆಗಳು ಹಾಗೂ ಈಗಲೂ ಕಲ್ಯಾಣ ಕರ್ನಾಟಕದಲ್ಲಿ ಪ್ರಚಲಿತವಿರುವ 'ಬಾಲ ಬಸಪ್ಪ' ಪರಂಪರೆಯ ಮಾದಿಗ ಕುಲತ್ವ ಇತ್ಯಾದಿಗಳ ಕಡೆ ನಾವು ಗಮನಹರಿಸಬೇಕು. ಹಾಗೇ ಮನೆಯಿಂದ ಓಡಿಬಂದ ಬಸವಣ್ಣನಿಗೆ ಆಶ್ರಯ ನೀಡಿದನೆಂದು ಹೇಳಲಾದ ಜಾತವೇದಿ ಮುನಿಯ ಗುಡಿಗೆ (ಸಮಾಜದ)ಆಚೆಯವರ ಗುಡಿ ಎಂಬರ್ಥದಲ್ಲಿ, 'ಆಚೇಶ್ವರ ಗುಡಿ'ಯೆಂಬ ಹೆಸರಿದೆ .
ಅಲ್ಲದೇ "ಬಳ ಬಳಿಯಲು ಬಂದ ಮಾದಾರನ ಮಗ ನಾನಯ್ಯ.. ಕಳೆದ ಹೊಲೆಯನೆಮ್ಮಯ್ಯ.. ಜಾತಿ ಸೂತಕ ಮಾದಾರನ ಮಗ ನಾನಯ್ಯ.. ಪನ್ನಗ ಭೂಷಣ ಕೂಡಲ ಸಂಗಯ್ಯಾ.. ಚನ್ನಯ್ಯನ ನೆನ್ನ ಮುತ್ತಯ್ಯ ನಜ್ಜನಪ್ಪಯ್ಯಾ" ಎಂದು ಬಸವಣ್ಣನವರೇ ಹೇಳಿಕೊಂಡಿದ್ದಾರೆ.
ಅಲ್ಲದೇ ಬಸವಣ್ಣ ತನ್ನ ಜಾತಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಐವತ್ತು ವಚನಗಳಲ್ಲಿ ಸೂಚಿಸಿದ್ದಾನೆ. ಈ ವಚನಗಳಲ್ಲಿ ಬಸವಣ್ಣ, ತಾನು ಮಾದಾರ ಚನ್ನಯ್ಯನ ವಂಶದವನು ಎಂದು ಹೇಳಿಕೊಳ್ಳುತ್ತಾನೆ. ಬೇರೆ ವಚನಕಾರರಿಗಿಂತ ಹೆಚ್ಚಿನ ಸಲ ತನ್ನನ್ನು ತಾನು ತೊತ್ತಿನ ಮಗ, ಡೋಹರ ಕಕ್ಕಯ್ಯನ ಮಗ ಅಂತ ಹೇಳಿಕೊಂಡಿದ್ದರಿಂದಲೇ ಬಸವಣ್ಣ ಮಾದಿಗನಿರಬಹುದು ಎನ್ನಬಹುದು
ನಾವು ಕೂಡ ಸಾಮಾನ್ಯರಂತೆ ಯೋಚಿಸೋಣ, ಯಾವುದೇ ಜಾತಿಯವರಿರಲಿ ತಾವು ಉನ್ನತ ಸ್ಥಾನದಲ್ಲಿದ್ದಾಗ ತನ್ನ ಜಾತಿಯವರ ಏಳಿಗೆಗೆ ಸಹಾಯ ಮಾಡುತ್ತಾನೆ (ಈಗಿನ ರಾಜಕೀಯವನ್ನೇ ಒಮ್ಮೆ ನೆನಪಿಸಿಕೊಳ್ಳಿ ) ಅದೇ ರೀತಿ ಬಸವನೂ ಕೂಡ ಮಂತ್ರಿಯಾದ ಕೂಡಲೇ ತನ್ನ ಜಾತಿಗೆ ಸಹಾಯಮಾಡತೊಡಗಿದ, ಹಾಗೂ ಅವರಿಗೂ ಲಿಂಗಧಾರಣೆ ಮಾಡತೊಡಗಿದ ಇದರಿಂದ ಇತರ ಉನ್ನತ ಜಾತಿಯವರು ರೊಚ್ಚಿಗೆದ್ದರು ಈ ವಿಷಯವನ್ನು ಬಿಜ್ಜಳನ ಗಮನಕ್ಕೂ ತಂದರು ಬಿಜ್ಜಳನು ಕೆಲವು ಬಾರಿ ಸಹಿಸಿದನಾದರೂ** ನಂತರ ಅವನ ಸ್ಥಾನಕ್ಕೇ ಕುತ್ತು ಬಂದಾಗ ಜನರ ವಿರುದ್ದ ಮಾತಾಡದೇ ಸುಮ್ಮನಿದ್ದ. ಮತ್ತು  ಮಂತ್ರಿ ಸ್ಥಾನದಿಂದ ಬಸವಣ್ಣನನ್ನು ಕೆಳಗಿಳಿಸಿದ. ಆನಂತರ ಶರಣರಾದ ಮಧುವರಸನ ಮಗಳು ಲಾವಣ್ಯ ಮತ್ತು ಹರಳಯ್ಯನ ಮಗ ಶೀಲವಂತನ ಮದುವೆಯನ್ನು ವಿರೋಧಿಸಿದ ಬಿಜ್ಜಳನು, " ಮಿತಾಕ್ಷರ" ವೆಂಬ ಪೊಳ್ಳು ಗ್ರಂಥದ ಆಧಾರದ ಮೇಲೆ, ವಿಲೋಮ ವಿವಾಹ ನೆಡೆದಿದೆಯಂದು ನಿರ್ಣಯಿಸಿ, ಮಧುವರಸ, ಹರಳಯ್ಯ ದಂಪತಿಗಳನ್ನು ಮತ್ತು ನವ ವಧುವರಾರಾದ ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ. ಬಸವನನ್ನು ಬೆನ್ನಟ್ಟಿಹೋದ ಸೇನೆ ಅವನನ್ನು ಕಲ್ಲಿನಿಂದ ಹೊಡೆದು ಕೊಲ್ಲುತ್ತದೆ,,





**ಹುಟ್ಟಿನಿಂದ ಕ್ಷೌರಿಕನಾದರೂ ಕ್ಷತ್ರಿಯನಾಗಿ ಪಟ್ಟವೇರಿದ್ದ ಬಿಜ್ಜಳನಿಗೆ ಬಸವಣ್ಣನ ಸಹೋದರಿಯೊಂದಿಗೆ ವಿವಾಹವಾಗಿರುತ್ತದೆ ಅದಕ್ಕಾಗಿ ಬಸವಣ್ಣನನ್ನು ಬಿಜ್ಜಳ ಸಹಿಸಿಕೊಂಡಿರಬಹುದು

Monday, June 4, 2012

ಮಹಾಭಾರತ [ಇದನ್ನ ಸೀರಿಯಸ್ಸ್ಆಗಿ ತಗೋಬೇಡಿ ಪ್ಲೀಸ್]

ಮಹಾಭಾರತದ ದೃತರಾಷ್ಟ್ರ ನಿಮಗೆ ಗೊತ್ತಲ್ಲ? (ಗಾಂಧಾರಿಯ ಗಂಡ, ಹುಟ್ಟು ಕುರುಡ)
ಈ ದೃತರಾಷ್ಟ್ರ ಒಂದುಬಾರಿ ಸ್ವೀಟ್ ತೆಗೆದು ಕೋಡು ಪಾಂಡವರ ಮನೆಗೆ ಬಂದ, ಪಾಂಡವರು TVನೋಡ್ತಾ ಹಾಲ್ ನಲ್ಲಿ ಕುಳಿತಿದ್ದರು, ಪಾಂಡವರಿಗೆಲ್ಲಾ ಸ್ವೀಟ್ ಕೊಟ್ಟನಂತರ ದ್ರೌಪತಿ ಅಲ್ಲಿ ಇರದೇ ಇದ್ದದ್ದು ಅವನ ಗಮನಕ್ಕೆ ಬಂತು,
'ದ್ರೌಪತಿ ಎಲ್ಲಿ' ಎಂದು ಪಾಂಡವರನ್ನು ಕೇಳಿದ, ಅವಳು ಸ್ನಾನ ಮಾಡುತ್ತಿರುವುದಾಗಿ ಪಾಂಡವರು ಹೇಳಿದರು, 'ಸರಿ' ಎಂದು ದೃತರಾಷ್ಟ್ರ Bathroom ಹತ್ರ ಹೋಗಿ Bathroom ಬಾಗಿಲು ತಟ್ಟಿದ,
ಒಳಗಿನಿಂದ ದ್ರೌಪತಿ 'ಯಾರದು?'
'ನಾನು ದೃತರಾಷ್ಟ್ರ'
'ಏನು ವಿಷಯ?' ಎಂದು ದ್ರೌಪತಿ ಅಲ್ಲಿಂದಲೇ ಕೇಳಿದಳು.
'ನಿನಗೆ ಸ್ವೀಟ್ ಕೊಡಬೇಕಿತ್ತು,, ತಗೋ ಬಾ'
ದ್ರೌಪತಿ ಮೈಮೇಲೆ ಒಂಚೂರು ಬಟ್ಟೆ ಇಲ್ಲದೇ ಸ್ನಾನ ಮಾಡುತ್ತದ್ದರಿಂದ ಮತ್ತೆ ಬಟ್ಟೆ ಹಾಕಿಕೊಂಡು ಬಾಗಿಲು ತೆಗೆಯೋದೇಕೆ? ದೃತರಾಷ್ಟ್ರ ಹೇಗಿದ್ದರೂ ಕುರುಡ ಅಲ್ವಾ? ಅವನಿಗೇನು ಗೊತ್ತಾಗುತ್ತೆ.. ಎಂದುಕೊಂಡು ಬಟ್ಟೆ ಹಾಕಿಕೊಳ್ಳದೇ ಬಾಗಿಲು ತೆರೆದಳು. ದೃತರಾಷ್ಟ್ರ ಅವಳಿಗೆ ಸ್ವೀಟ್ ಕೊಟ್ಟ,
ದ್ರೌಪತಿ ಸ್ವೀಟ್ ತಿನ್ನುತ್ತಾ,,,'ಸ್ವೀಟ್  ಕೊಟ್ರಲ್ಲಾ ಏನು ವಿಶೇಷ?'' ಎಂದಳು.
ಅದಕ್ಕೆ ದೃತರಾಷ್ಟ್ರ ' ನನಗೆ ಕಣ್ಣು ಬಂದವು ಅದ್ಕೇ ಈ ಸ್ವೀಟ್ ' ಅಂದ

ಸುಲಭದ ದುಡಿಮೆ

ಹೆಂಡತಿ ಸ್ನಾನ ಮಾಡುತ್ತದ್ದಳು, ಗಂಡ ಟಾಯ್ಲೆಟ್ಟಿನಲ್ಲಿದ್ದ. ಸರಿಯಾಗಿ ಅದೇ ಸಮಯಕ್ಕೆ ಕಾಲಿಂಗ್ ಬೆಲ್ ಕೂಗಿತು. ಯಾರು ಬಾಗಿಲು ತೆಗೆಯಬೇಕೆಂಬ ಬಗ್ಗೆ ಇಬ್ಬರಲ್ಲೂ ಅವರವರು ಇದ್ದಲಿಂದಲೇ ಎರಡು ನಿಮಿಷ ವಾಗ್ವಾದವಾಯಿತು. ನಿರ್ವಾಹವಿಲ್ಲದೆ, ಹೆಂಡತಿಯೇ ಅವಸರಕ್ಕೊಂದು ಟವಲ್ ಸುತ್ತಿಕೊಂಡು ಹೋಗಿ ಬಾಗಿಲು ತೆಗೆದಳು. ಬಂದಿದ್ದು, ಪಕ್ಕದ ಮನೆಯಾತ. ಗಂಡನ ಪ್ರೆಂಡು. ಇವನು ಏನು ಎತ್ತ ಅಂತ ಕೇಳುವ ಮುಂಚೆಯೇ ಅವನು, "...ಮೇಡಂ, ನೀವೀಗ ಒಂದ್ನಿಮ್ಷ ಆ ಟವಲ್ ತೆಗೆದು ಹಾಕಿ ನಿಂತುಕೊಂಡರೆ ನಾನು ನಿಮ್ಗೆ ಐದುಸಾವಿರ ರುಪಾಯಿ ಕೊಡ್ತೀನಿ" ಅಂದ.
ತಕ್ಷಣ ಏನು ಹೇಳಬೇಕೆಂದು ತೋರದಿದ್ದರೂ, ಸ್ವಲ್ಪ ಯೋಚಿಸಿದ ಅವಳು, 'ಸರಿ' ಅಂತ ಹೇಳಿ ಟವಲ್ ಬಿಚ್ಚಿದಳು. ಒಂದೇ ನಿಮಿಷ, ಅಷ್ಟೇ; ಮತ್ತೆ ಸುತ್ತಿಕೊಂಡಳು. ಅವನು ಥ್ಯಾಂಕ್ಸ್ ಹೇಳಿ , ಐದುಸಾವಿರ ರುಪಾಯಿ ಕೊಟ್ಟು ನೆಡೆದುಬಿಟ್ಟ. ಅವಳಿಗೆ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ. ಅರೆ, ಒಂದೇ ನಿಮಿಷದಲ್ಲಿ ಐದು ಸಾವಿರ ರುಪಾಯಿ ದುಡಿಮೆ! ಖುಷಿಯಿಂದ ನಡುಗುತ್ತಲೇ ಮತ್ತೆ ಬಾತ್ ರೂಮ್ ಗೆ ಹೋಗಿ ಕದವಿಕ್ಕಿಕೊಂಡಳು. ಟಾಯ್ಲೆಟ್ಟಿನಲ್ಲಿದ್ದ ಗಂಡ ಅಲ್ಲಿಂದಲೇ ಕೂಗಿ ಕೇಳಿದ,"ಯಾರೇ ಬಂದಿದ್ದು?" "ಪಕ್ಕದ ಮನೆಯವ್ನು..." ಅಂದಳು ಹೆಂಡತಿ, ತನ್ನ ಖುಷಿಯನ್ನು ಒಂದಿಷ್ಟೂ ತೋರಿಸದೆ. ತಕ್ಷಣ ಗಂಡನಿಂದ ಮತ್ತೊಂದು ಪ್ರೆಶ್ನೆ ಸಿಡಿಯಿತು; "...ನಂಗೆ ಕೊಡ್ಬೇಕಾಗಿದ್ದ ಐದು ಸಾವಿರ ರುಪಾಯಿ ಸಾಲದ ಬಗ್ಗೆ ಏನಾದ್ರೊ ಹೇಳಿದ್ನೋ ಇಲ್ವೋ?!

ಪ್ರೀತಿ ಅಂದ್ರೆ ಇದೇನಾ?

ಅವಳು ಕುರುಡಿ ಅವಳನ್ನು ಯಾರೂ ಇಷ್ಟಪಡುತ್ತಿರಲ್ಲಿ 'ಅವನೊಬ್ಬನನ್ನು ಬಿಟ್ಟು' ಅವನು ಇವಳನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ,
ಒಂದು ದಿನ ದೈರ್ಯ ಮಾಡಿ ಅವಳನ್ನು ಕೇಳಿಯೇಬಿಟ್ಟ 'ನನ್ನನ್ನು ಮದುವೆಯಾಗ್ತಿಯಾ? ನಿನ್ನನ್ನು ಚೆನ್ನಾಗಿ ನೋಡಿಕೊಳ್ತಿನಿ ' ಅಂತ ಅಂದ, ಅದಕ್ಕವಳು 'ನನಗೆ ದೃಷ್ಠಿ ಬಂದಕೂಡಲೇ ನಿನ್ನೇ ಮದುವೆ ಯಾಗುವೆ' ಎಂದಳು ಹುಡುಗ ಅವಳಮಾತಿನಿಂದ ಖುಷಿಯಾಗಿ ತಲೆಯಾಡಿಸಿದ.

ಸ್ವಲ್ಪ ದಿನಗಳ ನಂತರ ಹುಡುಗಿಗೆ ಯಾರೋ ಕಣ್ಣು ದಾನಮಾಡಿದರು ಅವಳಿಗೆ ದೃಷ್ಠಿಬಂತು, ಈಗವಳು ತನ್ನನ್ನು ಮದುವೆಯಾಗುತ್ತೆನೆಂದಿದ್ದ ಹುಡುಗನಿಗಾಗಿ ಹುಡುಕ ತೊಡಗಿದಳು, ಅವನು ಒಂದು ದಿನ ಇವಳಿಗೆ ಸಿಕ್ಕ ಅವಳಿಗೊಂದು ಆಶ್ಚರ್ಯ ಕಾದಿತ್ತು 'ಅವನಿಗೆ ಕಣ್ಣೇಇರಲ್ಲಿ ಅವನು ಕುರುಡನಾಗಿದ್ದ'
ಅವಳು ಬಂದಿದ್ದನ್ನರಿತ ಅವನು ಕೇಳಿದ 'ನನ್ನನ್ನು ಮದ್ವೆಯಾಗ್ತಿಯಾ?'
ಹುಡುಗಿ ಗಟ್ಟಿಮನಸ್ಸಿನಿಂದ ಹೇಳಿದಳು 'ಇಲ್ಲ ಸಾಧ್ಯವೇ ಇಲ್ಲ ನಿನ್ನಂಥ ಕುರುಡನನ್ನು ಮದುವೆಯಾಗಲಾರೆ' ಎಂದಳು, ಇದನ್ನು ಕೇಳಿ ಹುಡುಗನಿಗೆ ದುಖಃ ವಾಯಿತು ಸಮಾಧಾನ .ಪಟ್ಟುಕೊಂಡುಹೇಳಿದನು 'ನೀನು ನನ್ನನ್ನು ಮದುವೆಯಾಗಿ ಚೆನ್ನಗಿನೋಡಿಕೊಳ್ಳದಿದ್ದರೂ ಪರವಾಗಿಲ್ಲ ಕನಿಷ್ಟಪಕ್ಷ ನನ್ನ ಕಣ್ಣುಗಳನ್ನದರೂ ಚೆನ್ನಗಿ ನೋಡಿಕೋ' ಎಂದು ಹೇಳಿ ಹೊರಟು ಹೋದನು.

ಹೀಗಾಗೋದೇ ಲೈಫ್...

ಕ್ಯೂ: ಎರಡು ಸಮಾನಾಂತರ ಕ್ಯೂಗಳಲ್ಲಿ ಒಂದರಲ್ಲಿ ನಿಂತಿರುತ್ತೆವೆ.ನಿಂತಿರುವ ಕ್ಯೂ ಬೇಗನೆ ಚಲಿಸುತ್ತಿಲ್ಲ ಎಂದು ಪಕ್ಕದ ಕ್ಯೂನಲ್ಲಿ ನಿಲ್ಲುತ್ತೇವೆ ಆಗ ನಾವು ಬಿಟ್ಟು ಬಂದ ಕ್ಯೊ ಬೇಗನೆ ಚಲಿಸಲಾರಂಭಿಸುತ್ತದೆ.

ಟೆಲಿಫೋನ್: ನಾವು ರಾಂಗ್ ನಂಬರ್ ಗೆ ಡಯಲ್ ಮಾಡಿದಾಗ ಯಾವತ್ತೂ ಅದು ಎಂಗೇಜ್ ಆಗಿರುವುದೇ ಇಲ್ಲ.

ಬೈಕ್ ರಿಪೇರಿ: ಕೈಗೆ ಗ್ರೀಸ್ ಮೆತ್ತಿಕೊಂಡಿರುವಾಗಲೇ ಮೂಗು ತುರಿಸುತ್ತೆ.

ಕಚೇರಿ: ಬೈಕ್ ಟೈರ್ ಪಂಕ್ಚರ್ ಆಗಿದ್ದರಿಂದ ತಡವಾಯಿತು ಎಂದು ಬಾಸ್ ಬಳಿ ಸಬೂಬು ಹೇಳಿದರೆ. ಮಾರನೇ ದಿನವೇ ಟೈರ್ ಪಂಕ್ಚರ್ ಆಗಿರುತ್ತದೆ.

ಸ್ನಾನದಕಾನೂನು: ಮೈ-ಮುಖಕ್ಕೆಲ್ಲಾ ಸೋಪು ಬಳಿದುಕೊಂಡಿದ್ದಗಲೇ ಫೋನ್ ರಿಂಗಾಗುತ್ತದೆ.

ಆಕಸ್ಮಿಕ: ಇವಳ ಜೊತೆ ಇರುವುದನ್ನು ಯಾರೂ ನೋಡದಿದ್ದರೆ ಸಾಕು ಎಂದು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗಲೇ ಪರಿಚಯಸ್ಥರು ಎದುರು ಸಿಕ್ಕುತ್ತಾರೆ.

ಚಿತ್ರಮಂದಿರದಲ್ಲಿ: ಮೂಲೆಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿಗಳು ಯಾವಾಗಲೂ ಕೊನೆಗೆ ಬರುತ್ತಾರೆ.